ರಿಯಲ್ ಸ್ಟಾರ್ ಉಪೇಂದ್ರ ಲಾಕ್ಡೌನ್ ವೇಳೆ ಫುಲ್ ಆ್ಯಕ್ಟೀವ್ ಆಗಿದ್ದಾರೆ. ಅಸಹಾಯಕರಿಗೆ ಸಹಾಯ ಮಾಡ್ತಿದ್ದಾರೆ. ರೈತರಿಂದ್ಲೇ ಅವರು ಬೆಳೆದಿದ್ದನ್ನು ಖರೀದಿ ಮಾಡಿ ಹಂಚುತ್ತಿದ್ದಾರೆ. ಇದೇ ವೇಳೆ ನಾನು ಈ ರಾಜ್ಯದ ಮುಖ್ಯಮಂತ್ರಿ ಆಗ್ಬೇಕು? ನನ್ನನ್ನು ಗೆಲ್ಲಿಸಿ ಎಂದಿದ್ದಾರೆ. ಉಪ್ಪಿ ದೃಷ್ಠಿಯಲ್ಲಿ ಸಿಎಂ ಅಂದ್ರೆ ಏನು? ಇದೆಲ್ಲವನ್ನೂ ಅವರೇ ಎಳೆಎಳೆಯಾಗಿ ಅಭಿಮಾನಿಗಳ ಮುಂದಿಟ್ಟಿದ್ದಾರೆ.
ನಾನು ಉಪೇಂದ್ರ..
ಈ ರಾಜ್ಯದ ಮುಖ್ಯಮಂತ್ರಿ (C M) ಆಗ್ಬೇಕು…
ನಾನು ಚುನಾವಣೇಲಿ ಸ್ಪರ್ದಿಸಿದರೆ ? ನೀವು
ನನ್ನನ್ನ ಗೆಲ್ಲಸ್ತೀರಾ?
ನೋಡಿ ನಾನು ಸಮಾಜ ಸೇವೆ ಮಾಡ್ತಿದೀನಿ!
ರೈತರಿಂದ ಬೆಳೆಕೊಂಡು ಉಚಿತವಾಗಿ ಕಷ್ಟದಲ್ಲಿರೋರಿಗೆ ಹಂಚ್ತಿದೀನಿ,
ಚುನಾವಣೆ ಸಮಯದಲ್ಲಿ ಹೋರಾಟಾನೂ ಮಾಡ್ತೀನಿ,
ಆಡಳಿತ ಪಕ್ಷ, ವಿರೋಧ ಪಕ್ಷ, ಜನರಿಗೆ ಏನೂ ಮಾಡ್ದೆ ಸಂಪೂರ್ಣ ವಿಫಲ ಆಗಿದೆ ಅಂತ ಮಾಧ್ಯಮದಲ್ಲಿ ಕೂಗಿ ಹೇಳ್ತೀನಿ,
ಇವರನ್ನೆಲ್ಲಾ ಕಿತ್ಹಾಕಿ ನನಗೆ ಒಂದು ಅವಕಾಶ ಕೊಡಿ 🙏🙏🙏🙏🙏🙏🙏. .
ನಿಮ್ಮ ಮುಂದಿನ ಉಜ್ವಲ ಭವಿಷ್ಯಕ್ಕೆ ನಾನು ಕೆಲಸ ಮಾಡ್ತೀನಿ, ಹಗಲು ರಾತ್ರಿ ಕಷ್ಟಪಟ್ಟು ಸುವರ್ಣ ಕರ್ನಾಟಕ ಮಾಡ್ತೀನಿ!
ನನ್ನನ್ನ ಗೆಲ್ಲಿಸ್ತೀರಾ ???? 🙏🙏
ನೀವು ನನ್ನನ್ನ ಗೆಲ್ಲಸ್ತೀರೋ ಸೋಲಸ್ತೀರೋ…. ?
ಆದ್ರೆ …..
ನಾನು ಎಲೆಕ್ಷನ್ಗೆ ನಿಲ್ಲಲ್ಲ.
ಹಾಗಾದ್ರೆ ಉತ್ತಮ ಪ್ರಜಾಕೀಯ ಪಕ್ಷ ಯಾಕೇ ? ಅಂತ ಕೇಳ್ತೀರಾ ?
ಪ್ರಜಾಕೀಯದಿಂದ ದೊಡ್ಡ ಸಮಾಜ ಸೇವೆ ಮಾಡಿ ಹೆಸರು ಮಾಡಿರೋರು ಫೇಮಸ್ ವ್ಯಕ್ತಿಗಳು ಮೇಲೆ ಹೇಳಿದ ಯಾವ ಕ್ವಾಲಿಟೀ ಇರೋ ನಾಯಕರು ನಿಲ್ಲಲ್ಲ,
ದೊಡ್ಡ ನಾಯಕರನ್ನ ಕೊಡೋದು ರಾಜಕೀಯ !
ಪ್ರಜಾಕೀಯದಲ್ಲಿ ನಿಮಗೆ ಗೊತ್ತಿಲ್ಲದಿರೊ ಸಾಮಾನ್ಯರು ಚುನಾವಣೆಗೆ ನಿಲ್ತಾರೆ.,
ಬರೀ ಪ್ರಜಾಕೀಯ ವಿಚಾರ ತಳ್ಕೊಂಡು ಓಟ್ ಹಾಕಿ ಅವರಿಗೆ ಕೆಲಸ ಕೊಟ್ರೆ ನಿಮ್ ಜೊತೆ ನಿರಂತರ ಸಂಪರ್ಕದಲ್ಲಿದ್ದು, ನಿಮಗೆ ಬೇಕಾದ ಕೆಲಸ ಪೈಸ ಪೈಸ ಲೆಕ್ಕ ಕೊಟ್ಟು ಸಂಪೂರ್ಣ ಪಾರದರ್ಶಕತೆಯಿಂದ ಮಾಡ್ತಾರೆ.
ಪ್ರಜಾಕೀಯದ ( SOP ) ಕಾರ್ಯವೈಖರಿ ತರ ಕೆಲಸ ಮಾಡ್ಲಿಲ್ಲ , ನಿಮಗೆ ಅವನ/ಅವಳ ಕೆಲಸ ಇಷ್ಟ ಆಗ್ಲಿಲ್ಲ ಅಥವಾ ಹಣ, ಅಧಿಕಾರದ ಆಸೆಗೆ ಬೇರೆ ಪಕ್ಷದ ಜೊತೆ ಜಂಪ್ ಆಗೋಕೆ ಹೋದ್ರೆ………..
ನಾನು ಉಪೇಂದ್ರ
C M ಆಗಿ ನಿಮ್ ಜೊತೆ ನಿಲ್ತೀನಿ,
ನಿಮ್ ಜೊತೆ ಉಗ್ರ ಹೋರಾಟ ಮಾಡಿ, ಅಂತಾ ಭ್ರಷ್ಟ ಪ್ರತಿನಿಧಿ ರಾಜೀನಾಮೆ ಕೊಡೋತರ ಮಾಡ್ತೀನಿ.
ಈ ವ್ಯವಸ್ಥೆ ಸರೀ ಹೋಗೋಕೆೆ ಎರಡು ಎಲೆಕ್ಷನ್ ಜಾಸ್ತಿ ಆಗ್ಲಿ….
ಜನಕ್ಕೆ ಪ್ರಜಾಪ್ರಭುಗಳಿಗೆ ಅಭ್ಯರ್ಥಿ ಇಷ್ಟ ಆಗ್ದಿದ್ರೆ ಅವನು/ ಅವಳು ಕೆಳಗಿಳೀಬೇಕು
ಅಂತಾ ಕಾನೂನು ಬರ್ಬೇಕು.
ಅದಕ್ಕೆ
ನಿಮ್ ಜೊತೆ ನಾನು ಯಾವಾಗ್ಲೂ ಇರೋ permanent C M ( ಕಾಮನ್ ಮೆನ್ ) ಜನ ಸಾಮಾನ್ಯ … ?
ಇಲ್ಲ ಇಲ್ಲ …. ಜನ ಅಸಾಮಾನ್ಯರಲ್ಲಿ ಒಬ್ಬನಾಗಿರ್ತೀನಿ.
ಸರೀನಾ ?
ಹೌದು.. ಉಪ್ಪಿ, ಚುನಾವಣೆಗೆ ನಿಲ್ಲೋದನ್ನ ಅಂತ ಹೇಳಿದ್ದಾರೆ. ಸಾಮಾನ್ಯ ವ್ಯಕ್ತಿಯಾಗಿಯೇ ಜನಸೇವೆ ಮಾಡ್ತೀನಿ ಅಂದಿದ್ದಾರೆ. ಹೀಗಾಗಿ ಪ್ರಜಾಕೀಯದ ಮೂಲಕ ಉಪ್ಪಿ ಅದೇನೇನ್ ಮಾಡ್ತಾರೋ? ಅವ್ರ ಕಲ್ಪನೆ ಏನೇನ್ ಇದೆಯೋ ಮುಂದೆ ನೋಡೋಣ.